ಜೀ ಕನ್ನಡ ವಾಹಿನಿ ಕನ್ನಡಿಗರಿಗೆ ಆರಂಭದಿಂದಲೂ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುವ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಅಂದುಕೊಂಡಿದ್ದನ್ನು ತಪ್ಪದೇ ಪಾಲಿಸುತ್ತಾ ಬಂದಿದ್ದು, ಇತರ ವಾಹಿನಿಗಳ ವಾರಾಂತ್ಯದ ಕಾರ್ಯಕ್ರಮಗಳಾದ ಸಿನೆಮಾಗಳು, ಬಿಗ್ ಬಾಸ್ ಮತ್ತು ಡ್ಯಾನ್ಸ್ ಅಬ್ಬರಗಳ ನಡುವೆಯೂ ಕೂಡ ತನ್ನ ಕ್ವಾಲಿಟಿ ಹಾಗೂ ಕ್ವಾಂಟಿಟಿಯನ್ನು ಕಳೆದುಕೊಳ್ಳದೆ ಪ್ರೇPಕರನ್ನು ರಂಜಿಸುತ್ತಾ ಬಂದಿದೆ.
ಇತ್ತೀಚಿನ ರಿಯಾಲಿಟಿ ಷೋಗಳಲ್ಲಿ ಅತ್ಯುತ್ತಮ ಸ್ಥಾನದಲ್ಲಿರುವ ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಿನದಿಂದ ದಿನಕ್ಕೆ ನೋಡುಗರ ಹೃದಯಕ್ಕೆ ಹತ್ತಿರವಾಗುತ್ತಿದೆ. ತಮ್ಮ ನೆಚ್ಚಿನ ಕಲಾವಿದರ ಬಗ್ಗೆ ತಮಗೆ ತಿಳಿದಿರದಂಥ ತೆರೆಯ ಹಿಂದಿನ ಮತ್ತು ತೆರೆಯ ಮುಂದಿನ ರೋಚಕ ಕಥೆಯನ್ನು ಕೇಳಿ ಅವರೆಲ್ಲ ಹೀಗೂ ಇದ್ರಾ! ಎಂದು ಒಮ್ಮ ಯೋಚಿಸುವಂತಾಗುವ ಪ್ರೇPಕರು ವಾಹಿನಿಯ ಶ್ರಮದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ. ಕಳೆದ ಸೀಜನ್ನಲ್ಲಿ ಶಿವರಾಜ ಕುಮಾರ್, ಪುನೀತ್ ರಾಜ್ಕುಮಾರ್, ಅರ್ಜುನ್ ಸರ್ಜಾ, ಉಪೇಂದ್ರ ಸೇರಿದಂತೆ ಹಲವಾರು ಸೆಲೆಬ್ರಟಿಗಳ ಬಾಲ್ಯದ ಹಾಗೂ ಆರಂಭದ ಕಥೆಯನ್ನ ಕೇಳಿ ಈ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಅದೇರೀತಿ ಈಬಾರಿ ಕೂಡ ಪ್ರೇPಕರಿಗೆ ಮತ್ತೊಮ್ಮೆ ಕಲಾವಿದರ ದಂಡನ್ನೇ ಕರೆಸಿ ಮನರಂಜನೆ ನೀಡುತ್ತಿದೆ. ಈ ವಾರಾಂತ್ಯದ ಕಾರ್ಯಕ್ರಮದಲ್ಲಿ ರೆಬೆಲ ಸ್ಟಾರ್ ಅಂಬರೀಷ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಸಿನಿ ಜೀವನದ ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಲಿzರೆ. ಜೊತೆಗೆ ತಮ್ಮ ಸಿನಿ ಜಗತ್ತಿನ ಏಳು ಬೀಳುಗಳ ಬಗ್ಗೆ, ಕಷ್ಟದಲ್ಲಿ ಕೈ ಹಿಡಿದ ಸ್ನೇಹಿತರ ಬಳಗದ ಬಗ್ಗೆ, ತಮ್ಮ ಸಾಧನೆಯ ಹಿಂದಿರುವ ಅನೇಕ ಮಹನೀಯರ ಬಗ್ಗೆ ಮಾತನಾಡಿzರೆ. ಮಂಡ್ಯದ ಗಂಡಿನ ಮಾತಿನ ಗತ್ತನ್ನು ಅವರ ಮಾತಿನ ಕೇಳುವ ಅವಕಾಶ, ಅವರೊಳಗೆ ಅಡಗಿರುವ ಮತ್ತೊಬ್ಬ ಅಂಬಿಯನ್ನು ಕಾಣುವಂಥ ಸದವಕಾಶ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ ೯ ಘಂಟೆಗೆ ಜೀ ಕನ್ನಡ ವಾಹಿನಿಯ ವೀಕ್ಷಕರಿಗೆ ದೊರೆಯಲಿದೆ.
ಈ ಅಪರೂಪದ ಕಾರ್ಯಕ್ರಮದಲ್ಲಿ ನಿರ್ದೇಶಕ ಯೋಗರಾಜ ಭಟ್, ಜೈ ಜಗದೀಶ್, ತಾರಾ, ಸುಮಲತ ಅಂಬರೀಶ್, ರಾಕ್ಲೈನ್ ವೆಂಕಟೇಶ್, ಉದ್ಯಮಿ ಅಶೋಕ್ ಖೇಣಿ, ಅಂಬರೀಷ್ ಅವರ ಪುತ್ರ ಅಭಿಷೇಕ್ ಹಾಗೂ ಅನೇಕ ಗಣ್ಯರು ಅಂಬರೀಷ್ ಅವರ ಒಳ್ಳೆಯತನದ ಬಗ್ಗೆ, ತುಂಟತನಗಳ ಬಗ್ಗೆ, ಕಷ್ಟಗಳಿಗೆ ಅವರು ಸ್ಪಂದಿಸುವ ಬಗ್ಗೆ ಮಾತನಾಡಲಿzರೆ.